A rare video is circulating on Whatsapp, an interview of DVG by GPR. The audio is a bit difficult to catch, hence this attempt to pen down the conversation. There is a great message in this interview.
(I am not sure about ** ones.)
GPR ತಾವು ಬರೆಯೋಕ್ ಶುರು ಮಾಡಿದ್ದು ಯಾಕೇ ಅಂತ?
DVG ನನ್ನ ಮನಸ್ಸಿನಲ್ಲಿ ಆದ ಸಂತೋಷವನ್ನ, ನನಗೆ ಬೇಕಾದವರ ಜೊತೆಯಲ್ಲಿ ಹಂಚಿಕೊಂಡ್ರೇ...
GPR ಹಂಚಿಕೊಂಡ್ರೆ?
DVG ಇಮ್ಮಡಿ ಆಗತ್ತೆ ಆ ಸಂತೋಷ
GPR ನಮ್ಮ ಜನ ನೆಮ್ಮದಿಯಿಂದ ಸುಖವಾಗಿ ಬದುಕ ಬೇಕಾದ್ರೆ ಏನು ಮಾಡ್ಬೇಕು?
DVG ಸುಖ ಅಂಬೋದು, ಒಂದು ಕ್ಷಣದ ವಿಷಯ ಅಲ್ಲ, ಒಂದು ಕಾಲ ವಿಸ್ತಾರದ ವಿಷಯ.
GPR ನಿರಂತರ
DVG ಹೌದು, ಅದು point of time ಅಲ್ಲ, period of time
ಖಂಡಿತವಾಗಿ ಪ್ರತಿ ಮನುಷ್ಯನೂ ಶ್ರಮ ಪಡ್ಬೇಕಾಗುತ್ತೆ.
ಈ ಶ್ರಮದಲ್ಲಿ ಒಂದು ನೀತಿ ಇಟ್ಕೋಬೇಕು.
ಮೊದಲನೆಯದು: ಸತ್ಯ, ಶೋಧನೆಯ ಸತ್ಯ.
ಎಷ್ಟೋ ವಿಷಯಗಳನ್ನ ನಮಗೆ ಸತ್ಯ ಅಂತ ಹೇಳ್ತಾರೆ, ನಾವು ಅದನ್ನ ಶೋಧಸಬೇಕು
ಎರಡನಯದು, ಸತ್ಯ ಪ್ರಯೋಗದಲ್ಲಿ ಯುಕ್ತಾ-ಯುಕ್ತದ ವಿವೇಕ.
ಈ ಎರಡಕ್ಕೂ ಮೂಲವಾದದ್ದು ಸೌಜನ್ಯ
ಈ ಮೂರು ಇಟ್ಕೊಂಡು ದೇಶದ ಕೆಲಸಗಳನ್ನ ನಡೆಸಿದರೇ ಸುಭೀಕ್ಷೆ ಉಂಟಾಗ್ತದೆ, ಸ್ವ-ಇಚ್ಛೆ (**) ಉಂಟಾಗ್ತದೆ, ಶಾಂತಿ ಉಂಟಾಗ್ತದೆ.
GPR ನಮ್ಮ ದೇಶದ ಉದ್ಧಾರ ಕಾರ್ಯದಲ್ಲಿ ಯುವಕರ ಪಾತ್ರವೇನು ಸರ್?
DVG ಯುವಕರದೇ ದೊಡ್ಡ ಪಾತ್ರ. ಗಾಂಧಿಯವರ ವರೆಗೂ, ದಾದಬಾಯಿ ನವರೋಜಿ ಅವರ ಕಾಲದಿಂದ, ಕೆಲವು ಉದ್ದೇಶಗಳನ್ನ, ಕೆಲವು ಧ್ಯೇಯಗಳನ್ನ ಎತ್ತಿ ಹಿಡಿದ್ರು. ಅವುಗಳನ್ನ ಮುಂದಕ್ಕೆ ತೊಗೊಂಡು ಹೋಗೋ ಅಂತ ಕೆಲಸ ಯುವಕರದ್ದು. ಗಾಂಧಿಯವರ ಕಾಲದಲ್ಲಿ ಸ್ವಾತಂತ್ರ ಸಂಪಾದನೆಗೆ ಹ್ಯಾಗೆ ಯುವಕರು ಸಾವಿರ ಸಾವಿರವಾಗಿ ಬಂದರೋ, ಆ ಸ್ವಾತಂತ್ರನ ಸಂರಕ್ಷಣೆ ಮಾಡಿ ಅದರಿಂದ ಪ್ರಯೋಜನ ಕೂಡ ಮಾಡೊ ಕೆಲಸಕ್ಕೆ ಹತ್ತುಸಾವಿರ-ಹತ್ತುಸಾವಿರವಾಗಿ ಯುವಕರು ಬರಬೇಕು, ಆದರೇ ಸತ್ಯದಲ್ಲಿ ಪ್ರೀತಿ ಇರತಕ್ಕವರಾಗಿರ್ಬೇಕು, ವಿಚಾರದಲ್ಲಿ ಅಭ್ಯಾಸ ಇರತಕ್ಕವರಾಗಿರ್ಬೇಕು, ಸೌಜನ್ಯದಲ್ಲಿ ನಂಬಿಕೆ ಇರತಕ್ಕವರಾಗಿರ್ಬೇಕು, ಇದೇ ನನ್ನ, ಯುವಕರಲ್ಲಿ, ಪ್ರಾರ್ಥನೆ
ಇನ್ನೇನಾದ್ರೂ ಉಂಟಾ ರಾಜರತ್ತ್ನಂ?
GPR ಎ, ಇನ್ನೇನು ಕೇಳ್ಬೇಕಾದ್ದಿಲ್ಲ ಸರ್, ತಮ್ಮ ಅಶೀರ್ವಾದ ನಮ್ಮೇಲಿರ್ಬೇಕು
DVG ಸರಿ... ಸಂತೋಷನಪ್ಪ... ಸಕಲಂ ಭದ್ರಮಸ್ತಮವಾಹ! (**)
(I am not sure about ** ones.)
GPR ತಾವು ಬರೆಯೋಕ್ ಶುರು ಮಾಡಿದ್ದು ಯಾಕೇ ಅಂತ?
DVG ನನ್ನ ಮನಸ್ಸಿನಲ್ಲಿ ಆದ ಸಂತೋಷವನ್ನ, ನನಗೆ ಬೇಕಾದವರ ಜೊತೆಯಲ್ಲಿ ಹಂಚಿಕೊಂಡ್ರೇ...
GPR ಹಂಚಿಕೊಂಡ್ರೆ?
DVG ಇಮ್ಮಡಿ ಆಗತ್ತೆ ಆ ಸಂತೋಷ
GPR ನಮ್ಮ ಜನ ನೆಮ್ಮದಿಯಿಂದ ಸುಖವಾಗಿ ಬದುಕ ಬೇಕಾದ್ರೆ ಏನು ಮಾಡ್ಬೇಕು?
DVG ಸುಖ ಅಂಬೋದು, ಒಂದು ಕ್ಷಣದ ವಿಷಯ ಅಲ್ಲ, ಒಂದು ಕಾಲ ವಿಸ್ತಾರದ ವಿಷಯ.
GPR ನಿರಂತರ
DVG ಹೌದು, ಅದು point of time ಅಲ್ಲ, period of time
ಖಂಡಿತವಾಗಿ ಪ್ರತಿ ಮನುಷ್ಯನೂ ಶ್ರಮ ಪಡ್ಬೇಕಾಗುತ್ತೆ.
ಈ ಶ್ರಮದಲ್ಲಿ ಒಂದು ನೀತಿ ಇಟ್ಕೋಬೇಕು.
ಮೊದಲನೆಯದು: ಸತ್ಯ, ಶೋಧನೆಯ ಸತ್ಯ.
ಎಷ್ಟೋ ವಿಷಯಗಳನ್ನ ನಮಗೆ ಸತ್ಯ ಅಂತ ಹೇಳ್ತಾರೆ, ನಾವು ಅದನ್ನ ಶೋಧಸಬೇಕು
ಎರಡನಯದು, ಸತ್ಯ ಪ್ರಯೋಗದಲ್ಲಿ ಯುಕ್ತಾ-ಯುಕ್ತದ ವಿವೇಕ.
ಈ ಎರಡಕ್ಕೂ ಮೂಲವಾದದ್ದು ಸೌಜನ್ಯ
ಈ ಮೂರು ಇಟ್ಕೊಂಡು ದೇಶದ ಕೆಲಸಗಳನ್ನ ನಡೆಸಿದರೇ ಸುಭೀಕ್ಷೆ ಉಂಟಾಗ್ತದೆ, ಸ್ವ-ಇಚ್ಛೆ (**) ಉಂಟಾಗ್ತದೆ, ಶಾಂತಿ ಉಂಟಾಗ್ತದೆ.
GPR ನಮ್ಮ ದೇಶದ ಉದ್ಧಾರ ಕಾರ್ಯದಲ್ಲಿ ಯುವಕರ ಪಾತ್ರವೇನು ಸರ್?
DVG ಯುವಕರದೇ ದೊಡ್ಡ ಪಾತ್ರ. ಗಾಂಧಿಯವರ ವರೆಗೂ, ದಾದಬಾಯಿ ನವರೋಜಿ ಅವರ ಕಾಲದಿಂದ, ಕೆಲವು ಉದ್ದೇಶಗಳನ್ನ, ಕೆಲವು ಧ್ಯೇಯಗಳನ್ನ ಎತ್ತಿ ಹಿಡಿದ್ರು. ಅವುಗಳನ್ನ ಮುಂದಕ್ಕೆ ತೊಗೊಂಡು ಹೋಗೋ ಅಂತ ಕೆಲಸ ಯುವಕರದ್ದು. ಗಾಂಧಿಯವರ ಕಾಲದಲ್ಲಿ ಸ್ವಾತಂತ್ರ ಸಂಪಾದನೆಗೆ ಹ್ಯಾಗೆ ಯುವಕರು ಸಾವಿರ ಸಾವಿರವಾಗಿ ಬಂದರೋ, ಆ ಸ್ವಾತಂತ್ರನ ಸಂರಕ್ಷಣೆ ಮಾಡಿ ಅದರಿಂದ ಪ್ರಯೋಜನ ಕೂಡ ಮಾಡೊ ಕೆಲಸಕ್ಕೆ ಹತ್ತುಸಾವಿರ-ಹತ್ತುಸಾವಿರವಾಗಿ ಯುವಕರು ಬರಬೇಕು, ಆದರೇ ಸತ್ಯದಲ್ಲಿ ಪ್ರೀತಿ ಇರತಕ್ಕವರಾಗಿರ್ಬೇಕು, ವಿಚಾರದಲ್ಲಿ ಅಭ್ಯಾಸ ಇರತಕ್ಕವರಾಗಿರ್ಬೇಕು, ಸೌಜನ್ಯದಲ್ಲಿ ನಂಬಿಕೆ ಇರತಕ್ಕವರಾಗಿರ್ಬೇಕು, ಇದೇ ನನ್ನ, ಯುವಕರಲ್ಲಿ, ಪ್ರಾರ್ಥನೆ
ಇನ್ನೇನಾದ್ರೂ ಉಂಟಾ ರಾಜರತ್ತ್ನಂ?
GPR ಎ, ಇನ್ನೇನು ಕೇಳ್ಬೇಕಾದ್ದಿಲ್ಲ ಸರ್, ತಮ್ಮ ಅಶೀರ್ವಾದ ನಮ್ಮೇಲಿರ್ಬೇಕು
DVG ಸರಿ... ಸಂತೋಷನಪ್ಪ... ಸಕಲಂ ಭದ್ರಮಸ್ತಮವಾಹ! (**)